ಸೇನಾ ಮೂಲಗಳ ಪ್ರಕಾರ ಗುಪ್ತಚರ ಇಲಾಖೆ ನೀಡಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಪುಲ್ವಾಮಾ ಜಿಲ್ಲೆಯ ಗಾಂಧಿನಗರ ಪ್ರದೇಶದಲ್ಲಿ ಕಾಶ್ಮೀರ ಮೂಲದ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದು, ಆತನಿಂದ ಎಂಟು ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಾಂತಿಪೋರಾ ಜಿಲ್ಲೆಯ ಅರ್ಫಾನ್ ವಾನಿಯೇ ಬಂಧಿತ ಶಂಕಿತ ಭಯೋತ್ಪಾದಕನಾಗಿದ್ದು, ಈತನ ಬಳಿ 60,000ರೂಗಳಷ್ಟು ನಗದನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.