ಎಲ್ಲಾ ನಿರಾಶ್ರಿತರ ಶಿಬಿರ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿತೀಶ್ ಕಮಾರ್ ಸೂಚನೆ

ಮುಜಫರ್ ಪುರ್ ಜಿಲ್ಲೆಯ ನಿರಾಶ್ರಿತ ಶಿಬಿರದ ಲೈಂಗಿಕ ಹಗರಣದಿಂದ ಎಚ್ಚೆತ್ತುಕೊಂಡ ಬಿಹಾರ ಮುಖ್ಯಮಂತ್ರಿ
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on
ಮುಜಾಫರ್ ಫುರ: ಮುಜಫರ್ ಪುರ್ ಜಿಲ್ಲೆಯ ನಿರಾಶ್ರಿತ ಶಿಬಿರದ ಲೈಂಗಿಕ ಹಗರಣದಿಂದ ಎಚ್ಚೆತ್ತುಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರಾಜ್ಯದ ಎಲ್ಲಾ ಮಕ್ಕಳ ಮತ್ತು ಮಹಿಳಾ ನಿರಾಶ್ರಿತ ಶಿಬಿರಗಳನ್ನು ಪರಿಶೀಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೋಮವಾರ ಸೂಚಿಸಿದ್ದಾರೆ.
ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಗಾಗಿ ಈ ಕೂಡಲೇ ಎಲ್ಲಾ ನಿರಾಶ್ರಿತ ಶಿಬಿರಗಳಿಗೆ ಸೂಕ್ತ ಭದ್ರತೆ ನೀಡುವಂತೆಯೂ ಬಿಹಾರ ಸಿಎಂ ಆದೇಶಿಸಿದ್ದಾರೆ.
ಮುಜಾಫರ್ ಪುರ ಲೈಂಗಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಸಿಬಿಐ ತಂಡ ಈಗಾಗಲೇ ನಿರಾಶ್ರಿತ ಶಿಬಿರ ತಲುಪಿದ್ದು, ತನಿಖೆ ಮುಂದುವರೆಸಿದೆ.
ಮುಜಾಫರ್ ಪುರ ನಿರಾಶ್ರಿತ ಶಿಬಿರದಲ್ಲಿದ್ದ 44 ಬಾಲಕಿಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಉದ್ಯೋಗಿಗಳನ್ನು ಈಗಾಗಲೇ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com