ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಮೇಜರ್ ರಾಣೆ ಅವರ ಪಾರ್ಥಿಕ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಲು ಎಲ್ಲರೂ ಕಾದುಕುಳಿತಿದ್ದರೆ, ಬಿಜೆಪಿ ಶಾಸಕರು, ಕಾರ್ಪೊರೇಟರ್ ಗಳು ಹುತ್ಟುಹಬ್ಬ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆಯೇ ಶಾಸಕ ನರೇಂದ್ರ ಮೆಹ್ತಾ ಕ್ಷಮೆ ಯಾಚಿಸಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ನಿರೀಕ್ಷಣೆಯಲ್ಲಿರಬೇಕಾದರೆ ಹುಟ್ಟುಹಬ್ಬದ ಸಂಭ್ರಮ ನಡೆಯಬಾರದಿತ್ತು. ನಡೆದಿದ್ದು ದುರದೃಷ್ಟಕರ, ನಾವು ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ.