14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್, ಕಲ್ಲಿಕೋಟೆ, ಕಣ್ಣೂರ್, ಕಾಸರಗೂಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ ಹಾಗೂ ಎರ್ನಾಕುಲಂನಲ್ಲಿ ಆಗಸ್ಟ್ 16ರ ವರೆಗೂ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅನೇಕ ಭಾಗಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಿಂದಾಗಿ ಸೇತುಗಳು ಮುಳುಗಡೆಯಾಗಿವೆ ಹಾಗೂ ಕೊಚ್ಚಿ ಹೋಗಿದ್ದು ರೈಲ್ವೆ ಸಂಚಾರ ವ್ಯತ್ಯಯಗೊಂಡಿದೆ. ತಿರುವನಂತಪುರಂ–ಕನ್ಯಾಕುಮಾರಿ ಮಾರ್ಗ ಸೇರಿ ಹಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.