"ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ತೀವ್ರ ದುಃಖಿತಳಾಗಿದ್ದೇನೆ.ನಮ್ಮ ರಾಷ್ಟ್ರೀಯ ಜೀವನದಲ್ಲಿವಾಜಪೇಯಿ ಅವರು ಅತ್ಯುನ್ನತ ವ್ಯಕ್ತಿಯಾಗಿದ್ದರು.ತನ್ನ ಜೀವನದುದ್ದಕ್ಕೂ ಅವರು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಕಟಿಬದ್ದರಾಗಿದ್ದರು. ತ್ತು ಅವರ ಎಲ್ಲ ಕಾರ್ಯಗಳಲ್ಲಿ ಈ ಬದ್ಧತೆಯನ್ನು ಪ್ರದರ್ಶಿಸಿದರು, ಸಂಸತ್ ಸದಸ್ಯರಾಗಿ, ಸಚಿವ ಸಂಪುಟ ಸಚಿವ ಅಥವಾ ಭಾರತದ ಪ್ರಧಾನಿಯಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ" ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಅವರು ಸ್ನೇಹಜೀವಿ, ಅವರ ಸುತ್ತಲೂ ಅಭಿಮಾನಿಗಳಿರುತ್ತಿದ್ದರು.ವಾಕ್ಚಾತುರ್ಯದಿಂದ ಎದುರಿಗಿದ್ದವರನ್ನು ಮೋಡಿ ಮಾಡುವ ಕಲೆ ಅವರಲ್ಲಿತ್ತು. ವಾಜಪೇಯಿ ಅವರ "ಮರಣವು ಒಂದು ದೊಡ್ಡ ಅಂತರವನ್ನು ಸೃಷ್ಟಿಸಿದೆ."ನಾನು ನಮ್ಮ ಲಕ್ಷಾಂತರ ಸಹ ಭಾರತೀಯರಂತೆಯೇ ಅವರ ಮರಣಕ್ಕಾಗಿ ಮರುಗುತ್ತೇನೆ.ಅಟಲ್ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸುತ್ತೇನೆ" ಸೋನಿಯಾ ಹೇಳಿದ್ದಾರೆ.
"ಆಧುನಿಕ ಭಾರತದ ಅತಿ ಎತ್ತರದ ನಾಯಕರು" ಅಟಲ್ ಅವರಾಗಿದ್ದರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.ನಮ್ಮ ದೇಶವರ ಸೇವೆಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲಿದೆ ಎಂದು ಅವರು ಹೇಳಿದರು.