ಮಂಜಾಲಿ , ಆಲುವಾ ಪಟ್ಟಣದಲ್ಲಿ ನೆರೆಯಿಂದ ಸಂತ್ರಸ್ತರಾಗಿರುವವರಿಗೆ 1,500 ಆಹಾರ ಪ್ಯಾಕೆಟ್ ಗಳನ್ನು ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ಪೂರೈಸಲಾಗಿದೆ. 7,500 ಪ್ಯಾಕೆಟ್ ಗಳನ್ನು ತಕ್ಷಣ ಪೂರೈಸಲಾಗುವುದು. ಸಂಜೆಯೊಳಗೆ 20,000 ಆಹಾರ ಪೊಟ್ಟಣಗಳು ತಲುಪಲಿದೆ ಎಂದು ಎರ್ನಾಕುಲಂ ಜಿಲ್ಲಾಡಳಿತ ತಿಳಿಸಿದೆ. ಚೆಂಗನ್ನೂರು ಮತ್ತು ಪಟ್ಟಣಂತಿಟ್ಟದಲ್ಲಿ ನೆರೆ ನೀರಿನಿಂದಾಗಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಮಧುರೈ ಕಾರ್ಪೊರೇಶನ್ ಕೇರಳಕ್ಕೆ 20ಲಕ್ಷ ರೂ.ವೆಚ್ಚದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ. ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಶಾಲೆಗಳಿಗೆ ಆ.27ರಿಂದ 29ರ ತನಕ ರಾಜ್ಯ ಸರಕಾರದ ನಿರ್ದೇಶನದಂತೆ ಓಣಂ ರಜೆ ಘೋಷಿಸಲಾಗಿದೆ.