ಚೆನ್ನೈನಲ್ಲಿ ಮಾತನಾಡಿದ ಅಳಗಿರಿ ಅವರು, ಡಿಎಂಕೆ ಪಕ್ಷದ ಕಾರ್ಯಕರ್ತರು ತಾವೇ ಪಕ್ಷದ ಮುಂದಾಳತ್ವ ವಹಿಸಿಕೊಂಡು ಕರುಣಾನಿಧಿ ಅವರ ಗೌರವಾರ್ಪಣೆ ಯಾತ್ರೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷ ಮೂಲೆಗುಂಪಾಗಿದ್ದು, ನಾನು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯಾತ್ರೆ ಹಮ್ಮಿಕೊಂಡಿದ್ದೇನೆಯೇ ಹೊರತು ಪಕ್ಷವನ್ನು ಇಬ್ಭಾಗ ಮಾಡಲು ಅಲ್ಲ. ಪಕ್ಷವನ್ನು ರಕ್ಷಣೆ ಮಾಡಲು ಈಗ ಕಲೈನರ್ ಇಲ್ಲ. ಹೀಗಾಗಿ ಆ ಜವಾಬ್ದಾರಿ ನಮ್ಮ ಮತ್ತು ಕಾರ್ಯಕರ್ತರ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಪಕ್ಷಕ್ಕೆ ನನ್ನ ಅಗತ್ಯತೆ ಇದ್ದು, ನನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಇಲ್ಲ ಗಂಭೀರ ಸಮಸ್ಯೆ ಎದುರಿಸಿ ಎಂದು ಅಳಗಿರಿ ಎಚ್ಚರಿಕೆ ನೀಡಿದ್ದಾರೆ.