ಸ್ವಚ್ಛ ಭಾರತ ಯೋಜನೆ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛ: ಬ್ರಿಟಿಷ್ ಲೇಖಕ ರಸ್ಕಿನ್ ಬಾಂಡ್

ಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಚ್ಛ ಭಾರತ ಯೋಜನೆಯ ನಂತರ ಭಾರತ ಹಿಂದೆಂದಿಗಿಂತಲೂ
ರಸ್ಕಿನ್ ಬಾಂಡ್
ರಸ್ಕಿನ್ ಬಾಂಡ್
Updated on
ಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಚ್ಛ ಭಾರತ ಯೋಜನೆಯ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛವಾಗಿದೆ ಎಂದು ಹೇಳಿದ್ದಾರೆ. 
ಸಾಹಿತ್ಯ ವಲಯದಲ್ಲಿ ಖ್ಯಾತಿ ಪಡೆದಿರುವ ರಸ್ಕಿನ್ ಬಾಂಡ್,  ಟಾಟಾ ಸ್ಟೀಲ್ ಜಾರ್ಖಂಡ್ ಸಾಹಿತ್ಯ ಸಭೆಯ(ಜೆಎಲ್ಎಂ) ನಲ್ಲಿ ಭಾಗವಹಿಸಿ ಮಾತನಾಡಿದ್ದು,  ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಹಲವು ನಗರಗಳು ಹಿಂದೆ ಇದ್ದದ್ದಕ್ಕಿಂತಲೂ ಸ್ವಚ್ಛವಾಗಿವೆ. ಆದರೆ ಜನರು ಬೇಗ ತಮ್ಮ ಹಿಂದಿನ ಅಭ್ಯಾಸಗಳನ್ನು ಮತ್ತೆ ಪ್ರಾರಂಭಿಸುತ್ತಾರೆ, ಸಂಪೂರ್ಣವಾಗಿ ಅದನ್ನು ಬದಲಾವಣೆ ಮಾಡಲು ಸಮಯಾವಕಾಶ ಬೇಕಾಗುತ್ತದೆ ಎಂದು ರಸ್ಕಿನ್ ಬಾಂಡ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com