ತೆಲಂಗಾಣ: ಎಐಎಂಎಂ ಮುಖಂಡ ಅಕ್ಬರುದ್ದೀನ್ ಒವೈಸಿಗೆ ಜಯ

ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ತೆಲಂಗಾಣದಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಗೆಲುವು ಸಾಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ತೆಲಂಗಾಣದಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಗೆಲುವು ಸಾಧಿಸಿದ್ದಾರೆ.
ಹೈದರಾಬಾದ್ ನ ಚಂದ್ರಾಯನಗುಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಒವೈಸಿಗೆ ಮತದಾರರು ಮಣೆಹಾಕಿದ್ದು, ಒವೈಸಿ ಭರ್ಜರಿ ಗೆಲವು ಸಾಧಿಸಿದ್ದಾರೆ. ಒವೈಸಿ ತಮ್ಮ ಪ್ರತಿಸ್ಪರ್ಧಿಗಳಾದ ಟಿಆರ್ ಎಸ್ ನ ಸೀತಾರಾಮ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಈಸಾ ಬಿನೋಬೈದ್ ಮಿಸ್ತ್ರಿ ವಿರುದ್ಧ ಜಯಭೇರಿ ಭಾರಿಸಿದ್ದಾರೆ.
ಮತ ಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಒವೈಸಿ 4ನೇ ಹಂತದ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವ ವೇಳೆಗೆ 21,658 ಮತಗಳನ್ನು ಪಡೆದಿದ್ದರು, ಆ ಮೂಲಕ 18 ಸಾವಿರಕ್ಕೂ ಅಧಿಕ ಮುನ್ನಡೆಯೊಂದಿಗೆ ಸಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com