ಅಚ್ಚರಿಯಾದರೂ ಇದು ನಿಜ. ಪತ್ರಿಕೆಯೊಂದರ ವರದಿಯನ್ವಯ ಕಳೆದ ಒಂದು ವರ್ಷದ ಹಿಂದೆ ಅಂದರೆ ವಸುಂಧರ ರಾಜೆ ಅವರ ಸರ್ಕಾರ 4 ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಲು ರಾಜಸ್ತಾನ ಕಾಂಗ್ರೆಸ್ ಕಚೇರಿಯಲ್ಲಿ ಡಿಜಿಟಲ್ ಗಡಿಯಾರನ್ನು ಅಳವಡಿಸಲಾಗಿತ್ತಂತೆ. ಇದು ಸಮಯ ಹೇಳುವ ಗಡಿಯಾರವಲ್ಲ. ಬದಲಿಗೆ ಕೌಂಟ್ ಡೌನ್ ಗಡಿಯಾರವಾಗಿದ್ದು, ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಸರ್ಕಾರವನ್ನು ಸೋಲಿಸುವ ಕುರಿತು ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ನೀಡಲಾಗಿದ್ದ ಡೆಡ್ ಲೈನ್ ಸೂಚಿಸುವ ಗಡಿಯಾರವಾಗಿತ್ತು. ಗಡಿಯಾರದ ಮೇಲ್ಭಾಗದಲ್ಲಿ ಜನತೆಯ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದೇ ನಮ್ಮ ಗುರಿ ಎಂಬರ್ಥದ ಬರಹ ಕೂಡ ಹಾಕಲಾಗಿತ್ತು.