ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ: ಟಾಲ್ ಸ್ಟಾಯ್ ತಾಳ್ಮೆ ನೆನಪಿಸಿದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಚರ್ಚೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸಿಂದಿಯಾ, ರಾಹುಲ್, ಕಮಲ್ ನಾಥ್
ಸಿಂದಿಯಾ, ರಾಹುಲ್, ಕಮಲ್ ನಾಥ್
Updated on
ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿಗಳಾದ  ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಚರ್ಚೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟ್  ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮಾತುಕತೆ ಬಳಿಕ ರಾಹುಲ್ ಗಾಂಧಿ ಸಾಹಿತಿ ಲಿಯೊ ಟಾಯ್ ಸ್ಟಾಯ್ ನ ಸಾಲುಗಳನ್ನು   ಒಳಗೊಂಡ ಟ್ವೀಟ್ ಮಾಡಿದ್ದು, ಕಮಲ್ ನಾಥ್ ಮತ್ತು ಸಿಂದಿಯಾ ಇರುವ ಪೋಟೋ ಪ್ರಕಟಿಸಿ, ತಾಳ್ಮೆ ಮತ್ತು ಸಮಯದ ಅತ್ಯಂತ ಬಲಿಷ್ಠ ಯೋಧರು  ಎಂದು ಬರೆದುಕೊಂಡಿದ್ದಾರೆ.
ಈ ಮಧ್ಯೆ  ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಜೋತ್ಯಿರಾದಿತ್ಯ  ಸಿಂಧಿಯಾ, ಇದು ಸ್ಪರ್ಧೆಯಲ್ಲ, ಇದು ಕುರ್ಚಿಗೆ ಸಂಬಂಧಿಸಿದಲ್ಲ, ಮಧ್ಯಪ್ರದೇಶದ ಜನರ ಸೇವೆಗಾಗಿ ಇಲ್ಲಿದ್ದೇವೆ. ಸದ್ಯ ಭೋಪಾಲ್ ನತ್ತ ಮರಳುತ್ತಿದ್ದು, ನಿರ್ಧಾರದ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com