ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಲಕ್ಷ್ಮಿಯ ಪತಿ ಸಂತೋಷ್ .ಪತ್ನಿ ಕೊತ್ಟಿಗೆಯಲ್ಲಿ ನೇಣು ಬಿಗಿದುಕೊಂಡಿರುವದನ್ನು ಕಂಡಿದ್ದು ಪೋಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಸ್ಥಳಕ್ಕೆ ಧಾವಿಸಿದ ಪೋಲೀಸರಿಗೆ ಅಚ್ಚರಿ ಕಾದಿತ್ತು. ಮೃತ ಮಹಿಳೆಯ ಕಾಲುಗಳ ಮಧ್ಯದಲ್ಲಿ ಸೀರೆಯಲ್ಲಿ ಸಿಲುಕಿಕೊಂಡಿದ್ದ ಹೊಕ್ಕಳು ಬಳ್ಳಿ ಸಹಿತವಾಗಿ ಆಗ ತಾನೆ ಜನಿಸಿದ ಮಗು ಅವರ ಕಣ್ಣಿಗೆ ಬಿದ್ದಿದೆ.