ಮಂಜು ತಂದ ಅವಾಂತರ: ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ 8 ಬಲಿ!

ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮುಂದುವರೆದಿದ್ದು, ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಬೆನ್ನಲ್ಲೇ ಹರ್ಯಾಣದಲ್ಲಿ ಇದೇ ಚಳಿ ಮತ್ತು ರಸ್ತೆ ಮೇಲೆ ತೀವ್ರ ಮಂದು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ
ಹರ್ಯಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ
ಝಜ್ಜರ್: ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮುಂದುವರೆದಿದ್ದು, ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಬೆನ್ನಲ್ಲೇ ಹರ್ಯಾಣದಲ್ಲಿ ಇದೇ ಚಳಿ ಮತ್ತು ರಸ್ತೆ ಮೇಲೆ ತೀವ್ರ ಮಂದು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
ಹರ್ಯಾಣದ ಝಜ್ಜರ್ ನಲ್ಲಿ ಈ ಸರಣಿ ಅಪಘಾತ ಸಂಭವಿಸಿದ್ದು, ಮಂಜು ಕವಿದಿದ್ದರಿಂದ ರಸ್ತೆ ಮೇಲಿದ್ದ ವಾಹನಗಳು ಕಾಣುತ್ತಿರಲಿಲ್ಲ. ಪರಿಣಾಮ ಬೃಹತ್ ಟ್ರಕ್ ವೊಂದು ತನ್ನ ಮುಂದಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸುಮಾರು 10ಕ್ಕೂ ಹೆಚ್ಚು ವಾಹನಗಳು ಈ ಅಪಘಾತದಲ್ಲಿ ಜಖಂಗೊಂಡಿದ್ದು, ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
ಟ್ರಕ್ ಮುಂದಿದ್ದ ಜೀಪ್ ನಲ್ಲಿ ಸಂಚರಿಸುತ್ತಿದ್ದ ಸುಮಾರು 5ಕ್ಕೂ ಹೆಚ್ಚು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ನು ಝಜ್ಜರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com