ನಿಮ್ಮೊಂದಿಗೆ ಯಾರೇ ವಾಗ್ವಾದ ನಡೆಸಿದರೂ ಹತ್ಯೆ ಮಾಡಿ: ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿವಿ ವಿಸಿ ಸಲಹೆ, ವಿವಾದ

ನಿಮ್ಮೊಂದಿಗೆ ಯಾರೇ ಮಾತಿನ ಚಕಮಕಿ ನಡೆಸಿದರೂ ಅವರನ್ನು ಕೊಲೆ ಮಾಡಿ, ನಂತರ ಬಂದ ಪರಿಸ್ಥಿತಿಗಳನ್ನು ನಾನು ನೋಡಿಕೊಳ್ಳುತ್ತೇನೆಂದು ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿಶ್ವವಿದ್ಯಾಲಯದ ಪ್ರಾಂಶುಪಾಲರು...
ನಿಮ್ಮೊಂದಿಗೆ ಯಾರೇ ವಾಗ್ವಾದ ನಡೆಸಿದರೂ ಹತ್ಯೆ ಮಾಡಿ: ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿವಿ ವಿಸಿ ಸಲಹೆ, ವಿವಾದ
ನಿಮ್ಮೊಂದಿಗೆ ಯಾರೇ ವಾಗ್ವಾದ ನಡೆಸಿದರೂ ಹತ್ಯೆ ಮಾಡಿ: ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿವಿ ವಿಸಿ ಸಲಹೆ, ವಿವಾದ
Updated on
ಲಖನೌ: ನಿಮ್ಮೊಂದಿಗೆ ಯಾರೇ ಮಾತಿನ ಚಕಮಕಿ ನಡೆಸಿದರೂ ಅವರನ್ನು ಕೊಲೆ ಮಾಡಿ, ನಂತರ ಬಂದ ಪರಿಸ್ಥಿತಿಗಳನ್ನು ನಾನು ನೋಡಿಕೊಳ್ಳುತ್ತೇನೆಂದು ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿಶ್ವವಿದ್ಯಾಲಯದ ಪ್ರಾಂಶುಪಾಲರು ನೀಡಿರುವ ಸಲಹೆ ಇದೀಗ ಭಾರೀ ಆಕ್ರೋಶಗಳಿಗೆ ಕಾರಣವಾಗಿದೆ. 
ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪ ಕುಲಪತಿ ರಾಜಾ ರಾಮ್ ಯಾದವ್ ಅವರು, ಯಾರೊಂದಿಗಾದರೂ ಮಾತಿನ ಚಕಮಕಿ ನಡೆಸಿದಾಗ ಸಮಸ್ಯೆ ಹಿಡಿದು ನನ್ನ ಬಳಿ ಬರಬೇಡಿ. ನೇರವಾಗಿಯೇ ಅವರನ್ನು ಹೊಡೆಯಿರಿ, ಸಾಧ್ಯವಾದರೆ ಹತ್ಯೆ ಮಾಡಿ.ಮುಂದೆ ಬಂದಿದ್ದನ್ನು ನಾವು ನೋಡಿಕೊಳ್ಳುತ್ತೇವೆಂದು ಹೇಳಿದ್ದಾರೆ. 
ರಾಮ್ ಯಾದವ್ ಅವರು ನೀಡಿರುವ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com