ಬಾಲಕಿಯ ತಂದೆ ಬಾಲಕೃಷ್ಣ ಅವರು ಮಾತನಾಡಿ, ಈ ರೀತಿಯ ಪರಿಸ್ಥಿತಿ ಯಾವ ತಂದೆಗೂ ಬರಬಾರದು. ವೃತ್ತಿಯಲ್ಲಿ ನಾನು ಪೇಂಟರ್ ಆಗಿದ್ದು, ದಿನಗೂಲಿ ಆಧಾರದ ಮೇಲೆ ಕೆಲಸವನ್ನು ಹುಡುಕುವುದರಲ್ಲಿ ಕಾರ್ಯನಿರತನಾಗಿರುತ್ತೇನೆ. ಶಾಲೆಯಲ್ಲಿ ಶುಲ್ಕ ಪಾವತಿಸುವ ಕಡೆಯ ದಿನಾಂಕ ಆಗಿ ಹೋಗಿದೆ ಎಂದು ಯಾವಾಗಲೂ ಹೇಳುತ್ತಿದ್ದಳು. ಬಳಿಕ ನಾವು ಶುಲ್ಕವನ್ನು ಪಾವತಿಸಿ, ಆಕೆಯನ್ನು ಶಾಲೆಗೆ ಕಳುಹಿಸುತ್ತಿದ್ದೆವು. ಇದು ಯಾವಾಗಲೂ ಆಗುತ್ತಿತ್ತು. ಟ್ಯೂಷೆನ್'ಗಾಗಿ ಪ್ರತೀ ತಿಂಗಳು ರೂ.800 ಕಟ್ಟುತ್ತೆವು. ಈ ಬಾರಿ ರೂ.2000 ಶುಲ್ಕವಾದ್ದರಿಂದ ಕಟ್ಟಲು ಸಾಧ್ಯವಾಗಿರಲಿಲ್ಲ. ಮನೆಯ ಎಲ್ಲಾ ವ್ಯವಹಾರಗಳನ್ನೂ ನನ್ನ ಪತ್ನಿಯೇ ನೋಡಿಕೊಳ್ಳುತ್ತಿದ್ದಳು ಎಂದು ಹೇಳಿದ್ದಾರೆ.