ಬ್ಯಾರಿಕೇಡ್‍ಗೆ ಕಟ್ಟಿದ್ದ ತಂತಿ ಸಿಲುಕಿ ಬೈಕ್ ಸವಾರ ಸಾವು, ಪೊಲೀಸ್ ಅಮಾನತು

ರಸ್ತೆ ಮಧ್ಯೆ ನಿಲ್ಲಿಸಿದ್ದ ಎರಡು ಪೊಲೀಸ್ ಬ್ಯಾರಿಕೇಡ್ ಗೆ ಕಟ್ಟಿದ್ದ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ...
ಅಪಘಾತ
ಅಪಘಾತ
ನವದೆಹಲಿ: ರಸ್ತೆ ಮಧ್ಯೆ ನಿಲ್ಲಿಸಿದ್ದ ಎರಡು ಪೊಲೀಸ್ ಬ್ಯಾರಿಕೇಡ್ ಗೆ ಕಟ್ಟಿದ್ದ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. 
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೈಕ್ ಸವಾರ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಪಾಳಿ ಪೇದೆಗಳು ಎರಡು ಬ್ಯಾರಿಕೇಡ್ ಗೆ ತಂತಿ ಕಟ್ಟಿದ್ದು ಕತ್ತಲಲ್ಲಿ ಇದನ್ನು ಗಮನಿಸದೆ ಬಂದ ಬೈಕ್ ಸವಾರ ಮೃತಪಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
ಈ ಘಟನೆ ಸಂಬಂಧಿಸಿದಂತೆ ಇನ್ ಪೆಕ್ಟರ್ ಅನ್ನು ಬೇರೆ ಕಡೆಗೆ ವರ್ಗಾಹಿಸಲಾಗಿದೆ. ಇನ್ನು ನಾಲ್ವರು ಪೇದೆಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದರು. 
ಮೃತ ಸವಾರನನ್ನು ಅಭಿಶೇಕ್ ಎಂದು ಗುರುತಿಸಲಾಗಿದೆ. ಅಭಿಶೇಕ್ ಖಾಸಗಿ ಸಂಸ್ಥೆಯಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಬರುವಾಗ ಈ ಅವಘಡ ಸಂಭವಿಸಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಉಪ ಪೊಲೀಸ್ ಆಯುಕ್ತ ಅಸ್ಲಾಂ ಖಾನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com