ಕೇಂದ್ರದ ಬಜೆಟ್ ಪರಿಣಾಮ ಹಣದುಬ್ಬರ ಹಾಗೂ ಹಣಕಾಸಿನ ಕೊರತೆ ಹೆಚ್ಚಾಗಲಿದೆ. ಬಹದಾರ್ಥಿಕ ಸ್ಥಿರತೆಯಲ್ಲಿ ದೇಶ ರಾಜಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಎದುರಾಗಲಿದೆ. ಕೃಷಿ ವಲಯದಲ್ಲಿ ಸಂಕಷ್ಟ ಪರಿಸ್ಥಿತಿಗಳು ಮುಂದುವರೆಯಲಿದೆ. ಯುವಜನತೆ ನಿರುದ್ಯೋಗ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ರಫ್ತು ನೆಲಕಚ್ಚಲಿದೆ. ಯಾವುದೇ ಆಯಾಮದಲ್ಲೇ ನೋಡಿದರೂ ಈ ಬಾರಿಯ ಬಜೆಟ್ ಸಂಪೂರ್ಣವಾಗಿ ವಿಫಲಗೊಂಡಿದೆ. ಸರ್ಕಾರದ ಐದನೇ ಬಜೆಟ್ ನ್ನು ನೋಡಿದರೆ, 6ನೇ ಬಜೆಟ್ ನ್ನು ಈ ಸರ್ಕಾರ ಮಂಡನೆ ಮಾಡದಿರುವುದೇ ಒಳ್ಳೆಯದು ಎನಿಸುತ್ತದೆ ಎಂದು ತಿಳಿಸಿದ್ದಾರೆ.