"ನನ್ನ ಹೇಳಿಕೆ ಸಂಬಂಧ ನಾನು ಕೆಲ ಮಾಧ್ಯಮಗಳ ವರದಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ನೋಡಿದ್ದು, ಇಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯುವತಿಯರು ಬಿಯರ್ ಕುಡಿಯುವುದು ಕಳವಳಕಾರಿ ಬೆಳವಣಿಗೆ ಎಂದು ನಾನು ಹೇಳಿದ್ದೆ. ಆದರೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಆತಂಕ ಮತ್ತು ಭಯ ಎಂದೆಲ್ಲ ಬಂಬಿಸಲಾಗುತ್ತಿದೆ. ನನ್ನ ಜನರ ಬಗ್ಗೆ ನಾನು ಚಿಂತಿಸಬಾರದೇ.. ನಾನು ಒಂದು ರಾಜ್ಯದ ಮುಖ್ಯಮಂತ್ರಿ.. ನನ್ನ ರಾಜ್ಯದ ಜನರ ಆಗುಹೋಗಗಳ ಕುರಿತು ನನಗೆ ಖಂಡಿತಾ ಕಳವಳ ಇರಬೇಕು. ಇದನ್ನೇ ನಾನು ಹೇಳಿದ್ದೆ, ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ.