ಮಾಲೀಕನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕೆ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ...!

ಮಾಲೀಕನ ಪತ್ನಿಯೊಂದಿಗೆ ಓಡಿ ಹೋದ ಚಾಲಕನೊಬ್ಬನಿಗೆ ಥಳಿಸಿ, ಆತನ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ ನೀಡಿರುವ ಅಮಾನವೀಯ ಕೃತ್ಯವೊಂದು ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ; ಮಾಲೀಕನ ಪತ್ನಿಯೊಂದಿಗೆ ಓಡಿ ಹೋದ ಚಾಲಕನೊಬ್ಬನಿಗೆ ಥಳಿಸಿ, ಆತನ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ ನೀಡಿರುವ ಅಮಾನವೀಯ ಕೃತ್ಯವೊಂದು ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ. 
ಗೌತಮ್ ಕುಮಾರ್ (30) ಸಂತ್ರಸ್ತ ವ್ಯಕ್ತಿಯಾಗಿದ್ದಾನೆ. ಬರೌನಿ ಎಂಬ ಗ್ರಾಮದಲ್ಲಿ ಸಂತ್ರಸ್ತ ವ್ಯಕ್ತಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಟ್ರ್ಯಾಕ್ಟರ್ ಮಾಲೀನಕ ಪತ್ನಿಯೊಂದಿಗೆ ಸಂಬಂಧ ಬೆಳೆದಿದೆ. ಇದರಂತೆ ಇಬ್ಬರೂ ಫೆ.6 ರಂದು ಊರು ಬಿಟ್ಟು ಹೋಗಿದ್ದಾರೆ. 
ಬಳಿಕ ಟ್ರ್ಯಾಕ್ಟರ್ ಮಾಲೀಕ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ಮಹಿಳೆ ಮತ್ತೆ ಊರಿಗೆ ಬಂದಿದ್ದಾಳೆ. ಬಳಿಕ ತೆಘ್ರಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಈ ವೇಳೆ ಸ್ವಇಚ್ಛೆಯಿಂದಲೇ ನಾನು ಮನೆಬಿಟ್ಟು ಹೋಗಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ಮಹಿಳೆಗೆ ತನ್ನ ಪತಿಯ ಮನೆಗೆ ತೆರಳುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶವನ್ನು ಮಹಿಳೆ ಸಮ್ಮತಿಸಿದ್ದಾಳೆ. 
ಇದಾದ ಕೆಲವೇ ಗಂಟೆಗಳಲ್ಲಿ ಮಹಿಳೆಯ ಸಂಬಂಧಿಯೊಬ್ಬ ಟ್ರ್ಯಾಕ್ಟರ್ ಚಾಲಕ ಗೌತಮ್ ಬಳಿ ಮಹಿಳೆ ನಿನ್ನೊಂದಿಗೆ ವಾಸವಿರಲು ಇಚ್ಛಿಸುತ್ತಿದ್ದಾಳೆ. ಪೊಲೀಸ್ ಠಾಣೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗು ಎಂದು ಸುಳ್ಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಇಬ್ಬರೂ ಒಟ್ಟಿಗೆ ಬರುತ್ತಿದ್ದ ಸಂದರ್ಭದಲ್ಲಿ 20 ಮಂದಿಯಿದ್ದ ತಂಡವೊಂದು ಗೌತಮ್ ಗೆ ಥಳಿಸಿದ್ದಾರೆ. ಅಲ್ಲದೆ ಆ್ಯಸಿಡ್ ತುಂಬಿದ್ದ ಸಿರಿಂಜ್ ನ್ನು ಆತನ ಕಣ್ಣಿಗೆ ಇಂಜೆಕ್ಟ್ ಮಾಡಿದ್ದಾರೆ. ಈ ವೇಳೆ ಅತೀವ್ರ ಉರಿ ಹಾಗೂ ನೋವಿನಿಂದ ಗೌತಮ್ ಪ್ರಜ್ಞೆ ಕಳೆದುಕೊಕಂಡಿದ್ದಾನೆ. 
ಇದನ್ನು ನೋಡಿದ ದುಷ್ಕರ್ಮಿಗಳು ಗೌತಮ್ ಮೃತಪಟ್ಟಿದ್ದಾನೆಂದು ತಿಳಿದು, ಆತನನ್ನು ರಸ್ತೆಯ ಮಧ್ಯೆ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಗೌತಮ್ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದು, ಬೇಗುಸರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 
ಪ್ರಕರಣ ಸಂಬಂಧ ಮಹಿಳೆಯ ಪತಿ ದಯಾರಾಮ್ ಸಿಂಗ್'ನನ್ನು ಬಂಧನಕ್ಕೊಳಪಡಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com