ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ

ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.
ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ
ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ
ಕೊಯಮತ್ತೂರ್: ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.ಇದರಿಂದ ಮನನೊಂದ ಮಗ ನೇಣಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಐದನೇ ತರಗತಿ ಓದುತ್ತಿದ್ದ ಹತ್ತು ವರ್ಷದ ವಾಲಕ ನೇಣಿಗೆ ಶರಣಾಗಿದ್ದು ತಂದೆ ಸ್ನಾನ ಮಾಡುವಂತೆ ಗದರಿದ ಸಮಯದಲ್ಲಿ ಅವನು ತನ್ನ ಸ್ನೇಹಿತರೊಡನೆ ಆಟವಾಡುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
ಹಾಗೆ ಗದರಿದ ನಂತರ ಬಾಲಕ ಅರ್ಧ ಮನಸ್ಸಿನಿಂದ ಸ್ನಾನಕ್ಕಾಗಿ ಬಾತ್ ರೂಂ ಗೆ ತೆರಳಿದ್ದಾನೆ. ಅಲ್ಲಿ ಟವೆಲ್ ಹಾಗೂ ಅಪಿಪ್ ನ್ನು ಬಳಸಿ ನೇಣು ಬಿಗಿದುಕೊಂಡಿದ್ದಾನೆ. ಪಾಲಕರು ಮಗ ಎಷ್ಟು ಹೊತ್ತಾದರೂ ಬಾತ್ ರೂಂ ನಿಂದ ಹೊರಬರದೆ ಇದ್ದದ್ದು ಕಂಡು ಗಾಬರಿಯಾಗಿ ಬಾಗಿಲು ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಮಗನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಸತ್ತಿದ್ದು ವೈದ್ಯರು ಅದನ್ನು ದೃಢಪಡಿಸಿದ್ದರು. 
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com