ಸಂವಿಧಾನಾತ್ಮಕವಾಗಿ ಉನ್ನತ ಹುದ್ದೆಗಳನ್ನು ಹೊಂದಿದ ವ್ಯಕ್ತಿಗಳು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಸಾಮಾನ್ಯ ವ್ಯಕ್ತಿಗಳಾಗುವುದರಿಂದ ಅವರು ಅಧಿಕೃತ ನಿವಾಸ ತೆರವು ಮಾಡಬೇಕಾಗುತ್ತದೆ. ಇದು ಕೆಲ ಮಾಜಿ ಉನ್ನತ ವ್ಯಕ್ತಿಗಳ ಸ್ಮಾರಕಗಳಿಗೂ ಅನ್ವಯಿಸುತ್ತದೆ ಎಂದು ಸುಬ್ರಹ್ಮಣಿಯನ್ ಹೇಳಿದ್ದು, ಪ್ರಧಾನಿಯಾಗಲೀ, ರಾಷ್ಟ್ರಪತಿಯಾಗಲೀ ಒಂದು ಬಾರಿ ಅಧಿಕಾರದಿಂದ ನಿರ್ಗಮಿಸಿದ ಬಳಿಕ, ಸರ್ಕಾರಿ ಕಚೇರಿ ಅವರ ಪಾಲಿಗೆ ಇರುವುದಿಲ್ಲ. ಅವರು ಭಾರತದ ಇತರ ಸಾಮಾನ್ಯ ಪ್ರಜೆಗಳಂತೆ. ಆದ್ದರಿಂದ ವಿಶೇಷಾಧಿಕಾರ ಅಥವಾ ಸವಲತ್ತು ನೀಡುವ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.