ದೆಹಲಿಯಲ್ಲಿ ನಡೆದ ಸೇನಾ ತಂತ್ರಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಪಿನ್ ರಾವತ್ ಅವರು, ಶುತ್ರು ರಾಷ್ಟ್ರಗಳೊಂದಿಗಿನ ಸಮರ್ಥ್ಯ ಸೆಣಸಾಟಕ್ಕಾಗಿ ಮೊದಲು ನಾವು ನಮ್ಮ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಂತೆಯೇ ಸ್ವದೇಶಿ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲೇಬೇಕು ಎಂದು ಪ್ರತಿಪಾದಿಸಿರುವ ಬಿಪಿನ್ ರಾವತ್ ಅವರು, ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದ್ದು, ಇದಕ್ಕಾಗಿ ಶಸ್ತ್ರಾಸ್ತ್ರಗಳ ಆಮದು ಪ್ರಮಾಣ ಕಡಿತವಾಗಿ ದೇಶೀಯ ನಿರ್ಮಾಣ ಪ್ರಮಾಣ ದ್ವಿಗುಣಗೊಳ್ಳಬೇಕು ಎಂದು ಹೇಳಿದರು.