ಹರಿದ್ವಾರ: ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉತ್ತರಾಖಂಡ್ ರಾಜ್ಯದ ಬಿಜೆಪಿ ಶಾಸಕರೊಬ್ಬರು ಸರ್ಕಾರದ ಲಾಂಛನವನ್ನು ಬಳಕೆ ಮಾಡಿದ್ದು, ಇದೀಗ ಹಲವು ಟೀಕೆಗಳಿಗೆ ದಾರಿ ಮಾಡಿಕೊಟ್ಟಿದೆ.
ಪುತ್ರಿಯ ವಿವಾಹ ಹಿನ್ನಲೆ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರು ವಿವಾಹ ಆಮಂತ್ರಣ ಪತ್ರಿಕೆಯ ಮುಂಭಾಗದಲ್ಲಿ ಸರ್ಕಾರದ ಲಾಂಛನವನ್ನು ಬಳಕೆ ಮಾಡಿದ್ದಾರೆ.
ಸರ್ಕಾರದ ಲಾಂಛನ ಬಳಕೆಯನ್ನು ಸಮರ್ಥಿಸಿಕೊಂಡಿರುವ ರಾಥೋಡ್ ಅವರು, ನಾನೂ ಕೂಡ ಸರ್ಕಾರದ ಭಾಗವಾಗಿದ್ದು, ಸರ್ಕಾರದ ಲಾಂಛನ ಬಳಕೆ ಮಾಡಿಕೊಳ್ಳುವ ಮೂಲಕ ನಾನೇನು ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ಕಡುಬಡತನದಲ್ಲಿರುವ ಯುವತಿಯೊಬ್ಬಳ ವಿವಾಹವನ್ನು ನಾನು ನನ್ನ ಸ್ವಂತ ಮಗಳ ಮದುವೆಯಂತೆ ಮಾಡುತ್ತಿದ್ದೇನೆ. ಅದನ್ನೇಕೆ ನೋಡುತ್ತಿಲ್ಲ? ನಾನು ಸರ್ಕಾರದ ಒಂದು ಭಾಗವಾಗಿದ್ದೇನೆ. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆ ಮೇಲೆ ಸರ್ಕಾರದ ಲಾಂಛನವನ್ನು ಬಳಸಿಕೊಂಡಿದ್ದೇನೆ. ನಾನೇನು ಅಪರಾಧ ಮಾಡಿಲ್ಲ. ಇದೀ ರೀತಿ ಸಾಕಷ್ಟು ಜನರು ಮಾಡಿರುವುದನ್ನು ನಾನು ನೋಡಿದ್ದೇನೆಂದು ತಿಳಿಸಿದ್ದಾರೆ.