ತ್ರಿವಳಿ ತಲಾಖ್ ಮಸೂದೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಮಾತ್-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನಾ ಜಲಾಲುದ್ದೀನ್ ಉಮಾರಿಯವರು, ಏಕರೂಪ ನಾಗರೀಕ ನೀತಿ ಸಂಹಿತೆ ಕುರಿತಂತೆ ಸರ್ಕಾರ ನಿಜಕ್ಕೂ ಗಂಭೀರವಾಗಿರುವುದೇ ಆಗಿದ್ದರೆ, ಇಂತಹ ಮಸೂದೆಗಳನ್ನು ಜಾರಿಗೆ ತಂದು ಸಾರ್ವಜನಿಕರು ಬಹಿರಂಗವಾಗಿ ಚರ್ಚೆ ನಡೆಸುವಂತೆ, ಸಲಹೆಗಳನ್ನು ನೀಡುವಂತೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.