ಬೆಂಜಮಿನ್ ನೇತಾನ್ಯಹು ಮತ್ತು ಅವರ ಪತ್ನಿ ಸಾರಾ ಇಂದು ಬೆಳಗ್ಗೆ ತಾಜ್ ಮಹಲ್ ಗೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ನೇತನ್ಯಾಹು ದಂಪತಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ನೇತಾನ್ಯಹು ದಂಪತಿ ತಾಜ್ ಮಹಲ್ ನಲ್ಲೇ ಕೆಲವು ಗಂಟೆಗಳನ್ನು ಕಳೆಯಲಿದ್ದು, ಈ ವೇಳೆ ತಾಜ್ ಮಹಲ್ ಸಂಪೂರ್ಣ ಸೌಂದರ್ಯ ಸವಿಯಲಿದ್ದಾರೆ.