ದೆಹಲಿಯಲ್ಲಿ ನಡೆಯುತ್ತಿರುವ ವಾರ್ಷಿಕ ರೈಸಿನಾ ಸಂವಾದದಲ್ಲಿ ಭೂರಾಜಕೀಯ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕದ ಕೇಂದ್ರ ಗುಪ್ತಚರ ಇಲಾಖೆ(ಸಿಐಎ) ಮಾಜಿ ನಿರ್ದೇಶಕ ಡೇವಿಡ್ ಪೆಟ್ರಿಯಸ್ ಅವರು, ಭಾರತ ಪ್ರಚೋದಿತ ಭಯೋತ್ಪಾದನೆ ಎಂಬ ಶಬ್ದವನ್ನು ತಮ್ಮ ಇಡೀ ವೃತ್ತಿಯಲ್ಲಿ ಎಂದೂ ಕೇಳಿಲ್ಲ ಎಂದು ಹೇಳಿದ್ದಾರೆ. 'ಸಿಐಎ ನಿರ್ದೇಶಕನಾಗಿ ಹಾಗೂ ಅಂತರಾಷ್ಟ್ರೀಯ ಶಾಂತಿ ಪಾಲನಾ ಪಡೆಯ ಕಮಾಂಡರ್ ಆಗಿ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿ ಅನುಭವವಿರುವ ನಾನೆಂದೂ ಭಾರತ ಪ್ರಚೋದಿತ ಭಯೋತ್ಪಾದನೆ ಎಂದು ಕೇಳಿಲ್ಲ. ಅಂತೆಯೇ ಬಲೂಚಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ ಪೇಟ್ರಿಯಸ್ ಅವರು, ಪಾಕ್ ಸರ್ಕಾರ ಹಾಗೂ ಅಲ್ಲಿನ ಸೇನೆ ತಮ್ಮನ್ನು ನಡೆಸಿಕೊಳ್ಳುತ್ತಿರುವ ಕುರಿತಂತೆ ತಮ್ಮ ಪ್ರತಿಕ್ರಿಯೆಯಾಗಿ ಬಲೂಚಿಗಳು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಪ್ರತ್ಯೇಕತಾವಾದಕ್ಕೆ ಇಳಿದಿದ್ದಾರೆ ಎಂದು ಪೆಟ್ರೆಯಸ್ ತಿಳಿಸಿದ್ದಾರೆ.