ದೆಹಲಿ ಅಗ್ನಿ ದುರಂತ: ಕಾರ್ಖಾನೆಗೆ ಪರವಾನಗಿ ಕೊಟ್ಟಿದ್ದೇ ಆಪ್ ಸರ್ಕಾರ: ಬಿಜೆಪಿ

ಕಳೆದ ರಾತ್ರಿ ದೆಹಲಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು 17 ಮಂದಿ ಸಜೀವ ದಹನಗೊಂಡ ಪ್ರಕರಣದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಪಟಾಕಿ ಕಾರ್ಖಾನೆಗೆ ಪರವಾನಗಿ ಕೊಟ್ಟಿದ್ದೇ ಆಮ್ ಆದ್ಮಿ...
ಅಗ್ನಿ ಅನಾಹುತ
ಅಗ್ನಿ ಅನಾಹುತ
ನವದೆಹಲಿ: ದೆಹಲಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು 17 ಮಂದಿ ಸಜೀವ ದಹನಗೊಂಡ ಪ್ರಕರಣದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಪಟಾಕಿ ಕಾರ್ಖಾನೆಗೆ ಪರವಾನಗಿ ಕೊಟ್ಟಿದ್ದೇ ಆಮ್ ಆದ್ಮಿ ಸರ್ಕಾರ ಎಂದು ಬಿಜೆಪಿ ಆರೋಪಿಸಿದೆ. 
ಕಾರ್ಖಾನೆಯಿದ್ದ ಪ್ರದೇಶ, ಅದಕ್ಕೆ ಪರವಾನಗಿ ಎಲ್ಲವನ್ನೂ ಆಮ್ ಆದ್ಮಿ ಸರ್ಕಾರದ ಕೈಗಾರಿಕಾ ಇಲಾಖೆಯೇ ನೀಡಿದೆ. ಕಾರ್ಖಾನೆಯನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿತ್ತು.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com