ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಿತಿಕ್ರಿಯೆ ನೀಡಿರುವ ಕಿರಣ್ ರಿಜಿಜು ಅವರು, ಲಂಡನ್ ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ತೀವ್ರಗಾಮಿಗಳ ಚಟುವಟಿಕೆಗಳು ಭಾರತ ಶಕ್ತಿಯನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ದಿಂದ ರಣ್ ಆಫ್ ಕಚ್, ಕನ್ಯಾಕುಮಾರಿಯಿಂದ ಪಂಜಾಬ್'ವರೆಗೂ ನಾವೆಲ್ಲರೂ ಒಂದೇ ಎಂದು ಹೇಳಿದ್ದಾರೆ.