ಜಮ್ಮು/ಶ್ರೀನಗರ: ಹವಾಮಾನ ವೈಪರೀತ್ಯದಿಂದ ಕಳೆದ 3 ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ.
6,877 ಮಂದಿ ಭಕ್ತಾದಿಗಳಿದ್ದ 4ನೇ ಬ್ಯಾಚ್ ಅಮರನಾಥ ಯಾತ್ರೆಯನ್ನು ಮಳೆಯ ಹಿನ್ನೆಲೆಯಲ್ಲಿ ಸ್ಥಗಿತಿಗೊಳಿಸಲಾಗಿತ್ತು, ಇಂದು ಮತ್ತೆ ಆರಂಭವಾಗಿದೆ ಎಂದು ಕಾಶ್ಮೀರ ಅಧಿಕಾರಿಗಳು ತಿಳಿಸಿದ್ದಾರೆ.
1,429 ಮಹಿಳೆಯರು, 250 ಸಾಧುಗಳು ಭಗವತಿ ಬೇಸ್ ಕ್ಯಾಂಪ್ ನಿಂದ ತೆರಳಿದ್ದಾರೆ, ನುನ್ವಾನ್- ಪಹಲ್ಗಾಮ್ ಮತ್ತು ಬಾಲ್ ತಾಲ್ ಬೇಸ್ ಕ್ಯಾಂಪ್ ನಿಂದ ಬಿಗಿ ಭದ್ರತೆಯೊಂದಿಗೆ 229 ವಾಹನಗಳು ಹೊರಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು-ಶ್ರೀನಗರ ಹೆದ್ದಾರಿ ಪುನರ್ ಸ್ಥಾಪಿಸಿದ ನಂತರ ಅಮರನಾಥ ಯಾತ್ರೆಗೆ ಅನುಮತಿ ನೀಡಲಾಗಿದೆ.