ಅವಧಿ ಪೂರ್ವ ಚುನಾವಣೆಗೆ ಕಾಂಗೆಸ್ ಬೆಂಬಲ ವ್ಯಕ್ತಪಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದ ಬಳಿಕ ಚುನಾವಣೆ ನಡೆಯಬೇಕು. ಚುನಾವಣೆ ನಡೆಯುವುದು, ನಡೆಯದಿರುವುದು ರಾಜ್ಯಪಾಲ ವೊಹ್ರಾ ಅವರ ಮೇಲೆ ನಿಂತಿದೆ. ಚುನಾವಣೆ ನಡೆಸಬೇಕೆಂದು ಅವರು ಬಯಸಿದ್ದೇ ಆದರೆ, ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.