ಗನ್ ಪಾಯಿಂಟ್‌ನಲ್ಲಿ ರೈಲ್ವೆ ಇಂಜಿನಿಯರ್‌ನನ್ನು ಅಪಹರಿಸಿ, ಮದುವೆಯಾಗುವಂತೆ ಒತ್ತಾಯ!

ಭಾರತೀಯ ರೈಲ್ವೆ ಇಂಜಿನಿಯರ್ ಒಬ್ಬವನ್ನು ಗನ್ ಪಾಯಿಂಟ್ ನಲ್ಲಿ ಬಲವಂತವಾಗಿ ಅಪಹರಿಸಿ ಯುವತಿ ಜೊತೆ ಮದುವೆ ಆಗುವಂತೆ ಒತ್ತಾಯಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪಾಟ್ನಾ(ಬಿಹಾರ್): ಭಾರತೀಯ ರೈಲ್ವೆ ಇಂಜಿನಿಯರ್ ಒಬ್ಬವನ್ನು ಗನ್ ಪಾಯಿಂಟ್ ನಲ್ಲಿ ಬಲವಂತವಾಗಿ ಅಪಹರಿಸಿ ಯುವತಿ ಜೊತೆ ಮದುವೆ ಆಗುವಂತೆ ಒತ್ತಾಯಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. 
ವೈಶಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಭಾರತೀಯ ರೈಲ್ವೆಯಲ್ಲಿ ಸಿನಿಯರ್ ಸೆಕ್ಷನ್ ಇಂಜಿನಿಯರ್ ದುರ್ಗ ಶರಣ್ ಅವರು ಕೆಲಸ ಮುಗಿಸಿಕೊಂಡು ಸ್ನೇಹಿತನ ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ವಧು ತಂದೆ ಸೇರಿದಂತೆ ಐವರು ಸೇರಿ ಅಪಹರಣ ಮಾಡಿ ಮದುವೆ ಮಾಡಲು ಮುಂದಾಗಿದ್ದಾರೆ. 
ಈ ಮಧ್ಯೆ ದುರ್ಗ ಶರಣ್ ಸ್ನೇಹಿತ ಪೋಷಕರಿಗೆ ವಿಷಯ ಮುಟ್ಟಿಸಿದ್ದು ದುರ್ಗ ತಾಯಿ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ರಘುಪುರ್ ಗ್ರಾಮಕ್ಕೆ ತೆರಳಿ ದುರ್ಗ ಶರಣ್ ನನ್ನು ವಶಕ್ಕೆ ಪಡೆದಿದ್ದಾರೆ. 
ಇನ್ನು ಪೊಲೀಸರಿಗೆ ವಧು ಹಲವು ವರ್ಷಗಳಿಂದ ತಮ್ಮಿಬ್ಬರ ನಡುವೆ ಸಂಬಂಧವಿದ್ದು ಮದುವೆಯಾಗುವುದಾಗಿ ದುರ್ಗ ಶರಣ್ ಹೇಳಿದ್ದ ಎಂದು ಹೇಳಿದ್ದಾಳೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com