ಮೂವರು ಅರಣ್ಯಾಧಿಕಾರಿಗಳು, ಮೂವರು ಕಾವಲುಗಾರರು ಹಾಗೂ 12 ಜನ ಕಾರ್ಮಿಕರು ಹಂಡಾ ವಿದಿ ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 3 ಗಂಟೆ ವೇಳೆ ಅಲ್ಲೇ ಪಕ್ಕದಲ್ಲಿ ಮೇಯುತ್ತಿದ್ದ ನೀಲ್ ಗಾಯ್ ಗಳು ವಿಚಿತ್ರವಾಗಿ ವರ್ತಿಸಿವೆ. ಅಲ್ಲದೆ ಅವುಗಳು ಅಲ್ಲಿಂದ ಕಾಲು ಕಿತ್ತಿವೆ. ಇದನ್ನು ಕಂಡು ಗಲಿಬಿಲಿಗೊಂಡ 18 ಮಂದಿ ಇದು ಅಪಾಯ ಮುನ್ಸೂಚನೆ ಎಂದು ಭಾವಿಸಿ ಕೆಲಸವನ್ನು ಸುರಕ್ಷಿತ ಜಾಗಕ್ಕೆ ತೆರಳಿದ್ದಾರೆ.