2016ರಲ್ಲಿ ನಡೆದಿದ್ದ ಭಾರತೀಯ ಸೇನೆಯ ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಇನ್ನೂ ರಾಜಕೀಯ ಪಕ್ಷಗಳ ವಾದ-ಪ್ರತಿವಾದಗಳು ನಡೆಯುತ್ತಿದ್ದು, ಇತ್ತೀಚೆಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ರಾಹುಲ್ ಗಾಂದಿ ಸರ್ಜಿಕಲ್ ದಾಳಿ ಸತ್ಯತೆ ಅಥವಾ ನೈಜತೆಯನ್ನು ಪ್ರಶ್ನಿಸಿದ್ದರು. ಇದಕ್ಕೆ ಈಗ ತಿರುಗೇಟು ನೀಡಿರುವ ಮಾಜಿ ರಕ್ಷಣಾ ಸಚಿವ ಹಾಗೂ ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಸರ್ಜಿಕಲ್ ದಾಳಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.