ತಿರುಪತಿಗೆ 1 ಕೋಟಿ ರೂ. ದೇಣಿಗೆ ನೀಡಿದ ಹೆಚ್ ಸಿಎಲ್ ಮುಖ್ಯಸ್ಥ ಶಿವನಾಡರ್

ಸಾಪ್ಟ್ ವೇರ್ ದೈತ್ಯ ಕಂಪನಿಗಳಲ್ಲಿ ಒಂದಾದ ಹೆಚ್ ಸಿಎಲ್ ಮುಖ್ಯಸ್ಥ ಶಿವನಾಡರ್ ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ 1 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.
ಶಿವನಾಡರ್
ಶಿವನಾಡರ್
Updated on

ಆಂಧ್ರಪ್ರದೇಶ: ದೇಶದ   ದೈತ್ಯ  ಸಾಪ್ಟ್ ವೇರ್ ಕಂಪನಿಗಳಲ್ಲಿ ಒಂದಾದ  ಹೆಚ್  ಸಿಎಲ್   ಮುಖ್ಯಸ್ಥ ಶಿವನಾಡರ್ ತಿರುಪತಿಯ  ವೆಂಕಟೇಶ್ವರ  ದೇವಾಲಯಕ್ಕೆ 1 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

 ನಿನ್ನೆ ಸಂಜೆ ದೇವಾಲಯಕ್ಕೆ ಆಗಮಿಸಿದ ಶಿವನಾಡರ್  ಪೂಜೆ ಸಲ್ಲಿಸಿದ ಬಳಿಕ ,  1 ಕೋಟಿ ರೂಪಾಯಿಯ ಡಿಡಿಯನ್ನು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು  ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ. ರವಿ ಹೇಳಿದ್ದಾರೆ.

ತಿರುಪತಿಯಲ್ಲಿರುವ ದಿವ್ಯಾಂಗರ ಟ್ರಸ್ಟ್ ಹಾಗೂ ಆಸ್ಪತ್ರೆಗಳಿಗೆ ದೇಣಿಗೆ ಹಣ ಬಳಸಿಕೊಳ್ಳುವಂತೆ  ಶಿವನಾಡರ್  ತಿಳಿಸಿದ್ದಾರೆ ಎಂದು  ಟಿ. ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com