ಇದಲ್ಲದೆ ಪ್ರಕರಣದಲ್ಲಿ ರಾಜಕೀಯ ಗಣ್ಯ ವ್ಯಕ್ತಿಯೊಬ್ಬರ ಹೆಸರೂ ಕೂಡ ಕೇಳಿ ಬಂದಿದೆ. ಹಲ್ಲೆ ವೇಳೆ ದಾಳಿಕೋರರು ಬಿಜೆಪಿ ಶಾಸಕರೊಬ್ಬರ ಕುರಿತಂತೆ ಮಾತನಾಡುತ್ತಿದ್ದರು, ಬಿಜೆಪಿ ಶಾಸಕ ನಮ್ಮೊಂದಿಗಿದ್ದು, ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸಾಕ್ಷ್ಯ ನುಡಿದಿದ್ದಾರೆ.