ಮರಾಠ ಮೀಸಲು ಹೋರಾಟ: ಸಿಪಿಐ(ಎಂ) ಬೆಂಬಲ

ಮರಾಠ ಸಮುದಾಯಕ್ಕೆ ಮೀಸಲು ನೀಡಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಬುಧವಾರ ಬೆಂಬಲ ನೀಡಿದೆ...
ಮರಾಠ ಮೀಸಲು ಹೋರಾಟ
ಮರಾಠ ಮೀಸಲು ಹೋರಾಟ
ಮುಂಬೈ: ಮರಾಠ ಸಮುದಾಯಕ್ಕೆ ಮೀಸಲು ನೀಡಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಬುಧವಾರ ಬೆಂಬಲ ನೀಡಿದೆ. 
ಸಿಪಿಐ(ಎಂ) ಸದಸ್ಯ ಅಶೋಕ್ ಧವಾಲೆಯವರು ಪ್ರತಿಕ್ರಿಯೆ ನೀಡಿದ್ದು,  ಮೀಸಲಾತಿಯಿಂದ ಹೆಚ್ಚು ಆದಾಯವನ್ನು ಪಡೆಯುತ್ತಿರುವ ಮರಾಠ ಕುಟುಂಬಗಳನ್ನು ಸರ್ಕಾರ ಬಿಡಬಹುದು. ಆದರೆ, ಮರಾಠ ಸಮುದಾಯದಲ್ಲಿ ಹೆಚ್ಚು ಜನಸಂಖ್ಯೆಯಿದ್ದು ಮೀಸಲಾತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. 
ಮೀಸಲಾತಿ ಆಗ್ರಹಿಸಿ ಮರಾಠ ಸಮುದಾಯ ಮಹಾರಾಷ್ಟ್ರ ರಾಜ್ಯದಲ್ಲಿ ಬಂದ್ ಆಚರಿಸುತ್ತಿದ್ದು, ಬಂದ್ ಆಚರಣೆಯನ್ನು ಶಾಂತಿಯುತವಾಗಿ ನಡೆಸಬೇಕು. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದ್ದೇ ಆದರೆ, ಇತರೆ ಸಮುದಾಯಗಳನ್ನು ತಿರಸ್ಕಾರದಿಂದ ನೋಡಬಾರದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com