ಉತ್ತರಪ್ರದೇಶ: ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ.
ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಕ್ಕಳು ದೇವರ ಪ್ರಸಾದವಿದ್ದಂತೆ. ಪ್ರತೀ ಹಿಂದೂಗಳೂ 5 ಮಕ್ಕಳನ್ನು ಹೊಂದಿರಬೇಕು. ಎರಡು ಮಗು ಪುರುಷನಿಗಾಗಿ, ಎರಡು ಮಕ್ಕಳು ಮಹಿಳೆಯರಿಗಾಗಿ, ಮತ್ತೊಂದು ಮಗು ಹೆಚ್ಚುವರಿಯಾಗಿ ಹೆರಬೇಕೆಂದು ಹೇಳಿದ್ದಾರೆ.
ಜನಸಂಖ್ಯೆ ನಿಯಂತ್ರಣ, ಸಮತೋಲನವಿಲ್ಲದೇ ಹೋದರೆ, ಹಿಂದೂಗಳು ಅಲ್ಪಸಂಖ್ಯಾರಾಗಿ ಹೋಗುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದು ದೇವರು ಕೊಟ್ಟ ಪ್ರಸಾದವಿದ್ದಂತೆ. ಹಿಂದೂಗಳು ಬಲಗೊಂಡರೆ, ಭಾರತ ಬಲಗೊಳ್ಳುತ್ತದೆ. ಹಿಂದೂಗಳೇ ದುರ್ಬಲರಾದರೆ, ಭಾರತ ದುರ್ಬಲವಾಗುತ್ತದೆ ಎಂದು ತಿಳಿಸಿದ್ದಾರೆ.