ಮಕ್ಕಳು ದೇವರ 'ಪ್ರಸಾದ' ಇದ್ದಂತೆ, ಪ್ರತಿಯೊಬ್ಬ ಹಿಂದುವಿಗೂ ಐದು ಮಕ್ಕಳಿರಬೇಕು: ಬಿಜೆಪಿ ಶಾಸಕ

ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ...
ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್
ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್
Updated on
ಉತ್ತರಪ್ರದೇಶ: ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. 
ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಕ್ಕಳು ದೇವರ ಪ್ರಸಾದವಿದ್ದಂತೆ. ಪ್ರತೀ ಹಿಂದೂಗಳೂ 5 ಮಕ್ಕಳನ್ನು ಹೊಂದಿರಬೇಕು. ಎರಡು ಮಗು ಪುರುಷನಿಗಾಗಿ, ಎರಡು ಮಕ್ಕಳು ಮಹಿಳೆಯರಿಗಾಗಿ, ಮತ್ತೊಂದು ಮಗು ಹೆಚ್ಚುವರಿಯಾಗಿ ಹೆರಬೇಕೆಂದು ಹೇಳಿದ್ದಾರೆ. 
ಜನಸಂಖ್ಯೆ ನಿಯಂತ್ರಣ, ಸಮತೋಲನವಿಲ್ಲದೇ ಹೋದರೆ, ಹಿಂದೂಗಳು ಅಲ್ಪಸಂಖ್ಯಾರಾಗಿ ಹೋಗುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದು ದೇವರು ಕೊಟ್ಟ ಪ್ರಸಾದವಿದ್ದಂತೆ. ಹಿಂದೂಗಳು ಬಲಗೊಂಡರೆ, ಭಾರತ ಬಲಗೊಳ್ಳುತ್ತದೆ. ಹಿಂದೂಗಳೇ ದುರ್ಬಲರಾದರೆ, ಭಾರತ ದುರ್ಬಲವಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com