ಮೇ 18ರಂದು ಪತಿ ಶಂಕರ್ ಗೆ ನೀಡಿದ್ದ ಊಟದಲ್ಲಿ ಮತ್ತಿನ ಔಷಧಿ ಬೆರೆಸಿ ಕೊಟ್ಟಿದ್ದ ಆಶಾ ಸುಪಾರಿ ಹಂತಕರಿಗೆ ಕರೆ ಮಾಡಿದ್ದಾಳೆ. ಅದರಂತೆ ಹಂತಕರು ಆಗಮಿಸಿ ಶಂಕರ್ ನನ್ನು ಗೋಣಿಚೀಲದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವನ ಮೇಲೆ ರಾಡ್, ಮಚ್ಚುಗಳಿಂದ ಹಲ್ಲೆ ನಡೆಸಿಸಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ವ್ಬಳಿಕ ದೇಹವನ್ನು ಕಾಲುವೆಗೆ ಎಸೆಯಲಾಗಿದೆ.