ಉತ್ತರ ಪ್ರದೇಶದ ಪತ್ತೇಪುರ್ ಮೂಲದ ವಿಜಯ್ ಕುಮಾರ್ ಪಾಂಡೆ ಅವರು ಇದೇ ಜೂನ್ 20ಕ್ಕೆ ಹಸೆಮಣೆ ಹೇರಬೇಕಿತ್ತು. ಹೀಗಾಗಿ ಜೂನ್ 5ಕ್ಕೆ ಸ್ವಗ್ರಾಮಕ್ಕೆ ಮರಳುವುದಾಗಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿಜಯ್ ಕುಮಾರ್ ತಂದಗೆ ಕರೆ ಮಾಡಿ ತಿಳಿಸಿದ್ದರು. ಆದರೆ ನಿನ್ನೆ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.