ನಿನ್ನೆ ನಾಗಪುರದ ಆರ್ ಎಸ್ ಎಸ್ ಪ್ರಧಾನ ಕಚೇರಿಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಭಾಷಣ ಮಾಡಿದ್ದರು. ಈ ಭಾಷಣಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ, ಪ್ರಣಬ್ ಮುಖರ್ಜಿ ಅವರ ಭಾಷಣ ಭಾರತದ ವೈಭವೋಪೇತ ಇತಿಹಾಸವನ್ನು ನೆನಪಿಸಿದ್ದು, ದೇಶದ ಅಂತರ್ಗತತೆ, ಬಹುಸಂಖ್ಯಾತತೆ ಮತ್ತು ವೈವಿಧ್ಯತೆಯ ಏಕತೆಯು ಭಾರತದ ಅಡಿಪಾಯವಾಗಿದೆ ಎಂಬುದನ್ನು ಪ್ರಣಬ್ ಒತ್ತಿ ಹೇಳಿದ್ದಾರೆ ಎಂದು ಆರ್ ಎಸ್ ಎಸ್ ಹೇಳಿದೆ.