ಉತ್ತರ ಪ್ರದೇಶ: ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ , ಪರಿಣಾಮ ಮೂರು ಶಿಶುಗಳ ಸಾವು

ಉತ್ತರ ಪ್ರದೇಶದ ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ ಇಡಲಾಗಿದೆ. ಇದರಿಂದಾಗಿ ಅಗತ್ಯವಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗದೆ ಮೂರು ಶಿಶುಗಳು ಸಾವನ್ನಪ್ಪಿವೆ.
ಪಾಲಕರ ಆಕ್ರಂದನ
ಪಾಲಕರ ಆಕ್ರಂದನ
ಲಖನೌ:  ಉತ್ತರ ಪ್ರದೇಶದಲ್ಲಿ ಮತ್ತೊಂದು ವೈದ್ಯರ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್  ಇಡಲಾಗಿದೆ. ಇದರಿಂದಾಗಿ ಅಗತ್ಯವಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗದೆ ಮೂರು ಶಿಶುಗಳು ಸಾವನ್ನಪ್ಪಿವೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಈ ಶಿಶುಗಳು ಸಾವನ್ನಪ್ಪಿವೆ ಎಂದು ಪೋಷಕರು ಆರೋಪಿಸಿದ್ದಾರೆ.  ಆದಾಗ್ಯೂ, ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆ ಆಡಳಿತ ಮಂಡಳಿ, ಹೃದಯ ಸಂಬಂಧಿತ ತೊಂದರೆಯಿಂದಾಗಿ ಕೇವಲ ಒಂದೇ ಮಗು ಸಾವನ್ನಪ್ಪಿರುವುದಾಗಿ ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com