ಕೋಲ್ಕತಾ: ಸಿಡಿಲು ಬಡಿದು ಉದಯೋನ್ಮುಖ ಕ್ರಿಕೆಟಿಗ ಸಾವು

ಸಿಡಿಲು ಬಡಿದು 21 ವರ್ಷದ ಯುವ ಕ್ರಿಕೆಟ್ ಆಟಗಾರ ಮೃತಪಟ್ಟ ಘಟನೆ ...
ಕ್ರಿಕೆಟಿಗ ಮೃತಪಟ್ಟ ಆಸ್ಪತ್ರೆ ಮುಂದೆ ಜಮಾಯಿಸಿರುವ ಜನರು
ಕ್ರಿಕೆಟಿಗ ಮೃತಪಟ್ಟ ಆಸ್ಪತ್ರೆ ಮುಂದೆ ಜಮಾಯಿಸಿರುವ ಜನರು
Updated on

ಕೋಲ್ಕತ್ತಾ:ಸಿಡಿಲು ಬಡಿದು 21 ವರ್ಷದ ಯುವ ಕ್ರಿಕೆಟ್ ಆಟಗಾರ ಮೃತಪಟ್ಟ ಘಟನೆ ಕೋಲ್ಕತ್ತಾದ ಹೂಗ್ಲಿ ಜಿಲ್ಲೆಯ ವಿವೇಕಾನಂದ ಉದ್ಯಾನವನದ ಬಳಿ ನಡೆದಿದೆ.

ದಕ್ಷಿಣ ಕೋಲ್ಕತ್ತಾದ ವಿವೇಕಾನಂದ ಪಾರ್ಕ್ ಬಳಿ ಕಲ್ಕತ್ತಾ ಕ್ರಿಕೆಟ್ ಅಕಾಡೆಮಿಗೆ ಸೇರಿದ್ದ ಆಲ್ ರೌಂಡರ್ ದೆಬಬ್ರಾತ ಪಾಲ್ ಗೆ ಸಿಡಿಲು ಬಡಿದ ತಕ್ಷಣ ಅವರು ಕುಸಿದು ಬಿದ್ದರು ಎಂದು ಕ್ಲಬ್ ನ ಕಾರ್ಯದರ್ಶಿ ಅಬ್ದುಲ್ ಮಸೂದ್ ತಿಳಿಸಿದ್ದಾರೆ.

ನಿನ್ನೆ ಅಪರಾಹ್ನ ಮೈದಾನದಲ್ಲಿ ಅಭ್ಯಾಸ ಪಂದ್ಯ ಆರಂಭಿಸಬೇಕೆನ್ನುವಷ್ಟರಲ್ಲಿ ಸಿಡಿಲು ಬಡಿಯಿತು. ಸ್ಥಳದಲ್ಲಿಯೇ ಬಿದ್ದ ದೆಬಬ್ರತ ಪಾಲ್ ಅವರನ್ನು ಕೂಡಲೇ ಹತ್ತಿರದ ಸ್ಥಳಕ್ಕೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com