ಇದೇ ವೇಳೆ ಹೇಳಿಕೆ ನೀಡಿ ಕೋರ್ಟ್ ಆವರಣಿದಿಂದ ಹೊರಗೆ ಬಂದ ರಾಹುಲ್ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡಿ ಮಾನನಷ್ಟ ಮೊಕದ್ದಮೆ ಹೂಡಿರುವ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರೈತರ ಸಮಸ್ಯೆಗಳು, ಉದ್ಯೋಗ ಸೃಷ್ಟಿಯತ್ತ ಗಮನ ಕೊಡಬೇಕಾದ ಸರ್ಕಾರ ಅನಾವಶ್ಯಕ ವಿಚಾರಗಳನ್ನು ಗಂಭೀರವಾಗಿ ಸ್ವೀಕರಿಸಿದೆ. ರೈತರು, ಬಡವರು ಸರ್ಕಾರದ ತೀವ್ರ ಅಸಮಾಧಾನಗೊಂಡಿದ್ದು, ಈ ಸರ್ಕಾರ ಕೇವಲ ಧನಿಕರ ಪರ ಸರ್ಕಾರವಾಗಿದೆ. ಮನ್ ಕಿ ಬಾತ್ ಮಾತನಾಡು ಪ್ರಧಾನಿ ಮೋದಿ ಕಾಮ್ ಕಿ ಬಾತ್ ಬಗ್ಗೆ ಮಾತನಾಡುವುದಿಲ್ಲ. ಅವರ ಬೇಕಿದ್ದರೆ ನನ್ನ ವಿರುದ್ದ ಮತ್ತಷ್ಟು ಪ್ರಕರಣ ದಾಖಲಿಸಲಿ ಎಂದು ರಾಹುಲ್ ಗಾಂಧಿ ಹೇಳಿದರು.