ಕಾವೇರಿ ವಿವಾದ ಸಂಬಂಧ ಕುಮಾರಸ್ವಾಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಕುಮಾರಸ್ವಾಮಿಯವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿರುವುದ ವ್ಯರ್ಥ ಸಮಯವಷ್ಟೇ. ಕುಮಾರಸ್ವಾಮಿಯಾಗಲೀ, ನಾರಾಯಣ ಸ್ವಾಮಿಯಾಗಲೀ ಅಥವಾ ಇನ್ನು ಯಾರೇ ಸ್ವಾಮಿಗಳಾದರೂ, ನಮ್ಮಲ್ಲಿ ಕಾವೇರಿ ನಿರ್ವಹಣಾ ಮಂಡಳಿಯಿದ್ದು, ಮಂಡಳಿಯೇ ಮುಖ್ಯ ಸ್ವಾಮಿಯಾಗಿದೆ ಎಂದು ತಿಳಿಸಿದ್ದಾರೆ.