ಶಾಲೆಯ ವಿರುದ್ಧ ಸೇಡಿಗಾಗಿ ಕಿರಿಯ ವಿದ್ಯಾರ್ಥಿ ಕೊಲೆ, 10 ನೇ ತರಗತಿ ಬಾಲಕ ಪೊಲೀಸ್ ವಶ

ವಡೋದರ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ದೇವ್ ತಾದ್ವಿಯನ್ನು , ತಾನೇ ಕೊಲೆ ಮಾಡಿರುವುದಾಗಿ ಶಂಕಿತ ಶ್ರೀ ಭಾರತಿ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ.
ಶಾಲೆಯ ಚಿತ್ರ
ಶಾಲೆಯ ಚಿತ್ರ
 ವಡೋದರ: ವಡೋದರದ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದ್ದ 9 ನೇ ತರಗತಿ ವಿದ್ಯಾರ್ಥಿ ಕೊಲೆ ಪ್ರಕರಣ, ಕಳೆದ ವರ್ಷ ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದಿದ್ದ ಏಳು ವರ್ಷದ ಬಾಲಕನ ಕೊಲೆ ಪ್ರಕರಣದಂತೆ ಕಂಡುಬಂದಿದೆ.
ಎರಡು ಪ್ರಕರಣದಲ್ಲಿಯೂ ಶೌಚಗೃಹದಲ್ಲಿಯೇ ಕೊಲೆಯಾಗಿದೆ. ಎರಡೂ ಪ್ರಕರಣಗಳಲ್ಲೂ ಹಿಂದಿನ  ವರ್ತನೆಯ ಸಮಸ್ಯೆಗಳನ್ನು ಪ್ರದರ್ಶಿಸಿವೆ.
ವಡೋದರ ಶಾಲೆಯ   9 ನೇ ತರಗತಿಯ ವಿದ್ಯಾರ್ಥಿ ದೇವ್  ತಾದ್ವಿಯನ್ನು , ತಾನೇ  ಕೊಲೆ ಮಾಡಿರುವುದಾಗಿ  ಶಂಕಿತ  ಶ್ರೀ ಭಾರತಿ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ  ತಪ್ಪೊಪ್ಪಿಕೊಂಡಿದ್ದಾನೆ.ಉಪಾದ್ಯಾಯರು ಬೈದಿದ್ದರಿಂದ  ಶಾಲೆ ಮುಚ್ಚಿಸುವ ಸೇಡಿಗಾಗಿ  ಕೊಲೆ ಮಾಡಿದ್ದಾಗಿ  ಆರೋಪಿತ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸದಾಗಿ ದಾಖಲಾಗಿದ್ದ 9 ನೇ ತರಗತಿ ವಿದ್ಯಾರ್ಥಿ ತಾದ್ವಿಗೆ ಹಲವು ಬಾರಿ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.ಆತನ ಮೃತದೇಹದ ಪಕ್ಕದಲ್ಲಿಯೇ  12 ಇಂಚು ಉದ್ದದ ಚಾಕು ದೊರೆತಿತ್ತು.
ಶಾಲೆಗೆ ಹೊಂದಿಕೊಂಡಿರುವ ದೇವಾಲಯದ ಮೇಲ್ಛಾವಣೆಯಲ್ಲಿದ್ದ ಸ್ಯಾಟ್ ಚೆಲ್ ನ್ನು ವಶಪಡಿಸಿಕೊಂಡು  ನೋಡಿದ್ದಾಗ ಅದರಲ್ಲಿ ತೀಕ್ಷ್ಮವಾದ ಸಾಧನಗಳು, ಮೆಣಸಿನಕಾಯಿ ಪುಡಿ, ರಕ್ತಲೇಪಿತ ಶರ್ಟ್  ಕಂಡುಬಂದಿತ್ತು. ತರಗತಿಕೊಠಡಿಯಿಂದ ಆರೋಪಿ ಬ್ಯಾಗ್ ನ್ನು ಅಲ್ಲಿಗೆ ಎಸೆದಿರುವ ಸಾಧ್ಯತೆ ಇದೆ  ಎಂದು  ಪೊಲೀಸರು ಹೇಳಿದ್ದಾರೆ.
 ಆರೋಪಿ ಮೃತಪಟ್ಟ ತಾದ್ವಿ ಜೊತೆ ಯಾವುದೇ ದ್ವೇಷ ಹೊಂದಿರಲಿಲ್ಲ. ತಾದ್ವಿ 10 ದಿನಗಳ ಹಿಂದೆ ದಾಖಲಾದ ಬಗ್ಗೆ ಆತನಿಗೂ ಗೊತಿತ್ತು. ಈ ಹಿಂದೆ ಕೂಡಾ ಆರೋಪಿ ವಿದ್ಯಾರ್ಥಿ ಅನುಚಿತವಾಗಿ ವರ್ತಿಸಿ ಶಿಕ್ಷಕರಿಂದ ಬೈಯಿಸಿಕೊಂಡಿದ್ದ ಎಂದು ವಡೋದಾರ ಪೊಲೀಸ್ ಆಯುಕ್ತ ಮನೋಜ್ ಶಶಿಧರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com