ಸಂಗ್ರಹಾಲಯದಲ್ಲಿರುವ ಹೆಸರಾಂತ ವ್ಯಕ್ತಿಗಳ ಪ್ರತಿಮೆಯ ಸಾಲಿಗೆ ರಾಮ್ದೇವ್ ಅವರು ಸೇರಿದ್ದು, ಈಗಾಗಲೇ ಸಂಗ್ರಹಾಲಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಕ್ರೀಡೆ, ಸಿನಿಮಾ ಮುಂತಾದ ವಿಭಾಗಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.