ಅಹಮದಾಬಾದ್(ಗುಜರಾತ್): ಗುಜರಾತ್ ಕಾಂಗ್ರೆಸ್ ನಾಯಕರಾದ ಇಂದ್ರನೀಲ್ ರಾಜ್ ಗುರು ಸೋಮವಾರ ಪಕ್ಷ ತೊರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಅಸಮರ್ಪಕ ಆಡಳಿತ ಧೋರಣೆಯಿಂದಾಗಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾಗಿ ರಾಜ್ ಗುರು ಮಾದ್ಯಮದೆದುರು ಹೇಳಿಕೆ ನಿಡಿದ್ದಾರೆ.
ರಾಜ್ ಕೋಟ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜ್ ಗುರು ಅವರ ಸಲಹೆಗಳನ್ನು ಪಕ್ಷದ ಹಿರಿಯ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇಂದ್ರನೀಲ್ ರಾಜ್ ಗುರು 2017 ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ವಿರುದ್ಧ ರಾಜ್ ಕೋಟ್ (ಪಶ್ಚಿಮ) ಕ್ಷೇತ್ರದಿಂದ ಸ್ಪರ್ಧಿಸಿ ಸುದ್ದಿಯಾಗಿದ್ದರು.