ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್ ಎಂಬ ಪುಸ್ತಕವನ್ನು ಸೈಫುದ್ದೀನ್ ಸೊಜಿಯವರು ಬರೆದಿದ್ದು, ಇಂದು ಪುಸ್ತಕ ಬಿಡುಗಡೆ ಸಮಾರಂಭ ನಡೆದಿದೆ. ಸಮಾರಂಭದಲ್ಲಿ ಮಾತನಾಡಿರುವ ಅವರು, ಸರ್ದಾರ್ ಪಟೇಲರು ವಾಸ್ತವಿಕವಾದಿಯಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಪಟೇಲರು ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ಲಿಖತ್ ಅಲಿ ಖಾನ್ ಅವರಿಗೆ, ಹೈದರಾಬಾದ್ ಬದಲಿಗೆ ಕಾಶ್ಮೀರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದಾರೆ.