ಅತ್ತ ಮದನ್ ಮಿತ್ರಾ ಅವರು ಸುದ್ದಿಗೋಷ್ಠಿ ವಿಚಾರ ಪಶ್ಟಿಮ ಬಂಗಾಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದಂತೆ ಇತ್ತ ಮದನ್ ಮಿತ್ರಾ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿ ಹಾಕಿದೆ. ಅಲ್ಲದೆ ಬುಡಕಟ್ಟು ಕುಟುಂಬದ ಆರೋಪಗಳ ಹಿಂದೆ ಟಿಎಂಸಿ ಷಡ್ಯಂತ್ರವಿದ್ದು, ಬುಡಕಟ್ಟು ಕುಟುಂಬವನ್ನು ತನ್ನ ರಾಜಕೀಯ ಏಳಿಗೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತಾನು ಮಾಡುತ್ತಿರುವ ಕೆಲಸವನ್ನು ಬಿಜೆಪಿ ಮೇಲೆ ಹಾಕುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯಕ್ಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ.