ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ಥ ಕುಟುಂಬದ ಸದಸ್ಯ ಪುಚು ರಾಜ್ಬರ್, ನಮ್ಮ ಮನೆಗೇ ಆಗಮಿಸಿ ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕಿದ್ದರು. ಆದರೆ ನಾವು ಬಿಜೆಪಿ ಸೇರುವುದರಿಂದ ಅವರಿಗಾಗುವ ಲಾಭ ನಷ್ಟಗಳ ಬಗ್ಗೆ ತಿಳಿದಿಲ್ಲ. ಆದರೆ ಅವರು ಹೇಳಿದ ರೀತಿ ನಮಗೆ ಭಯ ಹುಟ್ಟಿಸಿತು. ಹೀಗಾಗಿ ನಾವು ರಕ್ಷಣೆ ಕೋರಿ ಮಮತಾ ಬ್ಯಾನರ್ಜಿ ಅವರ ಬಳಿ ಬಂದೆವು ಎಂದು ಹೇಳಿದರು. ಇದೇ ವೇಳೆ ಅದೇ ಕುಟುಂಬದ ಸದಸ್ಯರಾದ ತಾಯಿ ಅಸ್ತಾಮಿ ರಾಜ್ಭರ್, ಸಿಸುಬಾಲಾ ರಾಜ್ಹರ್ ಪುತ್ರ ಸಂಜಯ್ ರಾಜ್ಭರ್ ತೃಣಮೂಲ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಪಕ್ಷದ ಘೋಷಣೆ ಕೂಗಿ ಅಧಿಕೃತವಾಗಿ ಟಿಎಂಸಿ ಪಕ್ಷ ಸೇರಿದರು.